ಸೋಮವಾರ, ಏಪ್ರಿಲ್ 28, 2025

ಅನಾಮಧೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಏ.28(ಕರ್ನಾಟಕ ವಾರ್ತೆ): ನಗರದ ಹದ್ದಿನಗುಂಡು ರೈಲಿ ನಿಲ್ದಾಣಗಳ ಮಧ್ಯೆ ಅಂದಾಜು 30 ವಷÀðದ ಅನಾಮದೇಯ ವ್ಯಕ್ತಿಯು ಏ.27 ರಂದು ರೈಲ್ವೇ ಕೀ ಮೀ ನಂ:209/2-6 ರ ಮಧ್ಯೆ ಅಪ್ ಲೈನ್ ಹಳಿಯಲ್ಲಿ ಮೃತಪಟ್ಟಿದ್ದು, ಮೃತನ ವಾರಸುದಾರರು ತಿಳಿದಿರುವುದಿಲ್ಲ. ಈ ಕುರಿತು ರೈಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ವಾರಸುದಾರರ ಪತ್ತೆಗೆ ಸಹಕರಿಸಬೇಕು ಎಂದು ಉಪ ನಿರೀಕ್ಷಕರು ತಿಳಿಸಿದ್ದಾರೆ. ಚಹರೆ ಗುರುತು: ಅಂದಾಜು 5.5 ಅಡಿ ಎತ್ತರ, ಮುಖ ಚಿದ್ರ ಚಿದ್ರವಾಗಿದೆ. ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ತಲೆಯಲ್ಲಿ 02 ಇಂಚು ಕೂದಲು ಮತ್ತು ಸಣ್ಣ ಮೀಸೆ ಇರುತ್ತದೆ. ಕೆಂಪು ಬಣ್ಣದ ಮತ್ತು ನೆರಳೆ ಮಿಶ್ರಿತ ಕಟ್ಟಾಗಿರುವ ರೇಡಿಮೇಡ್ ಅಂಗಿ ಖಇಗಿಂಒP ಅಂತಾ ಇರುತ್ತದೆ ಮತ್ತು ಆಕಾಶ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾನೆ, ಸೊಂಟದಲ್ಲಿ ಕೆಂಪು ಉಡದಾರ ಅದರಲ್ಲಿ ಒಂದು ತಾಯತ ಮತ್ತು ಬಲಗೈಗೆ ಒಂದು ದಾರ ಕಟ್ಟಿರುತ್ತಾನೆ. ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ರೈಲ್ವೇ ಪೊಲೀಸ್ ಠಾಣೆಯ ಪಿಎಸ್ ಮೊ.948082131, ರೈಲ್ವೇ ಪೊಲೀಸ್ ಠಾಣೆ ರಾಯಚೂರು ಮೊ.9480800471 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ