ಬುಧವಾರ, ಜನವರಿ 7, 2026

ಬಳ್ಳಾರಿ ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆ-2025

ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟ ಬಳ್ಳಾರಿ,ಜ.07(ಕರ್ನಾಟಕ ವಾರ್ತೆ): ಬಳ್ಳಾರಿ ಜಿಲ್ಲಾ ಯೋಜನಾ ಸಮಿತಿಗೆ ಪುರಸಭಾ ಕ್ಷೇತ್ರದಿಂದ ಚುನಾಯಿತ ಸದಸ್ಯರನ್ನು ಆಯ್ಕೆ ಮಾಡುವ ಸಂಬAಧ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ ಎಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ತಿಳಿಸಿದ್ದಾರೆ. ಬಳ್ಳಾರಿ ನಗರದ ಎಸ್.ಎನ್ ಪೇಟೆಯ ಕೆ.ಎಸ್.ಅಶೋಕ್ ಕುಮಾರ್, ಕೌಲ್ ಬಜಾರ್ ನ ಎಂ.ಗೋವಿAದರಾಜುಲು, ಬಾಪೂಜಿನಗರದ ಉಮಾದೇವಿ ಶಿವರಾಜ, ಇನ್ನೋರ್ವ ಕೌಲ್ ಬಜಾರ್ ನ ನಿಯಾಜ್ ಅಹ್ಮದ್.ಟಿ., ಕೋಟೆ ಪ್ರದೇಶದ ಶಶಿಕಳಾ. ಕುರುಗೋಡಿನ ಕೊರವರ ನಾಗಭೂಷಣಂ, ಎನ್.ಗುರುಮೂರ್ತಿ, ನಟರಾಜ. ಸಂಡೂರಿನ ಕುರೇಕುಪ್ಪ ಗ್ರಾಮದ ಸೋಮಪ್ಪ.ಎಸ್., ಡಿ.ಬಸವನಗೌಡ, ವಿ.ಕಲ್ಗುಡಿಯಪ್ಪ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ