ಗುರುವಾರ, ನವೆಂಬರ್ 20, 2025

ಕಂಪ್ಲಿ ಪುರಸಭೆ: ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ

ಬಳ್ಳಾರಿ,ನ.20(ಕನಾಟಕ ವಾರ್ತೆ): ಕಂಪ್ಲಿ ಪುರಸಭೆ ವ್ಯಾಪ್ತಿಯ ಕಂಪ್ಲಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿನ ಹಳೆ ಬಸ್ ನಿಲ್ದಾಣದ ಮಳಿಗೆಗಳು, ಬಳ್ಳಾರಿ ರಸ್ತೆಯಲ್ಲಿರುವ ನೆಲ ಮತ್ತು ಒಂದನೇ ಮಹಡಿ ಮಳಿಗೆಗಳು ಶಿಥೀಲಾವಸ್ಥೆಗೊಂಡಿದ್ದು, ವಾಸಕ್ಕೆ ಯೋಗ್ಯವಿಲ್ಲವೆಂದು ಮತ್ತು ಅದೇ ಜಾಗದಲ್ಲಿ ಬಸ್ ಶೆಲ್ಟರ್ ಆಗಿ ನಿರ್ಮಿಸಲು ಮತ್ತು ಈ ಜಾಗವನ್ನು ಕೆಕೆಆರ್‌ಟಿಸಿ ಇಲಾಖೆಗೆ ಹಸ್ತಾಂತರಿಸಲಾಗುತ್ತಿದ್ದು, ಈ ಕುರಿತು ಕಂಪ್ಲಿ ಪಟ್ಟಣದ ಸಾರ್ವಜನಿಕರಿಂದ ಯಾವುದೇ ರೀತಿಯ ತಂಟೆ-ತಕರಾರು ಇದ್ದಲ್ಲಿ 15 ದಿನ ಒಳಗಾಗಿ ಕಂಪ್ಲಿ ಪುರಸಭೆ ಕಚೇರಿಗೆ ಅರ್ಜಿಯ ಮೂಲಕ ಲಿಖಿತವಾಗಿ ಆಕ್ಷೇಪಣೆ ಸಲ್ಲಿಸಬಹುದು ಎಂದು ಕಂಪ್ಲಿ ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ