ಗುರುವಾರ, ಮಾರ್ಚ್ 12, 2026

ಬಳ್ಳಾರಿ: ಇಪಿಎಫ್‌ಓ ಪ್ರಾದೇಶಿಕ ಕಚೇರಿಯಿಂದ ಬಾಕಿ ವಸೂಲಾತಿಗಾಗಿ ‘ವಿಶೇಷ ಅಭಿಯಾನ’

ಬಳ್ಳಾರಿ,ಮಾ.12(ಕರ್ನಾಟಕ ವಾರ್ತೆ): ಬಳ್ಳಾರಿ ಇಪಿಎಫ್‌ಓ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ಬರುವ ಕಾರ್ಮಿಕರ ಭವಿಷ್ಯ ನಿಧಿಯ ಬಾಕಿ ಮೊತ್ತವನ್ನು ವಸೂಲಿ ಮಾಡಲು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಓ) ವತಿಯಿಂದ ಮಾರ್ಚ್ ಮಾಹೆಯಲ್ಲಿ ‘ವಿಶೇಷ ವಸೂಲಾತಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ಬಳ್ಳಾರಿ ಪ್ರಾದೇಶಿಕ ಭವಿಷ್ಯ ನಿಧಿಯ ಆಯುಕ್ತ ಕೆ.ವಿ ಪ್ರವೀಣ್ ಅವರು ತಿಳಿಸಿದ್ದಾರೆ. ಬಳ್ಳಾರಿ, ವಿಜಯನಗರ, ಕೊಪ್ಪಳ ಮತ್ತು ಚಿತ್ರದುರ್ಗ ಜಿಲ್ಲೆಗಳ ಎಲ್ಲಾ ಸಂಸ್ಥೆಗಳು ಮತ್ತು ಉದ್ಯೋಗದಾತರು ಈ ಅಭಿಯಾನದ ವ್ಯಾಪ್ತಿಗೆ ಬರಲಿದ್ದು, ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳಿಗೆ ಬಳ್ಳಾರಿ ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ನೇರವಾಗಿ ಭೇಟಿ ನೀಡಿ, ಪ್ರಸಕ್ತ ಸಾಲಿನ ಮತ್ತು ಹಳೆಯ ಬಾಕಿ ಮೊತ್ತವನ್ನು ವಸೂಲಿ ಮಾಡಲಿದ್ದಾರೆ. ತಕ್ಷಣವೇ ವಸೂಲಿ ಮಾಡಬಹುದಾದ ಕೆಟಗರಿಯಲ್ಲಿ ಅತಿ ಹೆಚ್ಚು ಬಾಕಿ ಉಳಿಸಿಕೊಂಡಿರುವ ಬಳ್ಳಾರಿ ಪ್ರಾದೇಶಿಕ ಕಚೇರಿ ವ್ಯಾಪ್ತಿಗೆ ಒಳಪಡುವ ಬಳ್ಳಾರಿ, ಚಿತ್ರದುರ್ಗ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳ ವಿವಿಧ ಸುಸ್ತಿದಾರರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಈ ಕೆಳಕಂಡAತಿದೆ. *ಸುಸ್ತಿದಾರರ ಪಟ್ಟಿ:* ಬಳ್ಳಾರಿಯ ಬಿಎಂಸಿಆರ್‌ಸಿ(ವಿಮ್ಸ್), ಗಂಗಾವತಿಯ ಚಿನ್ಮಯ ಶಿಕ್ಷಣ ಸಂಸ್ಥೆ, ಕುಷ್ಟಗಿಯ ಪುರಸಭೆ ಕಚೇರಿ, ಗ್ಯಾಮನ್ ಇಂಜಿನಿಯರ್ ಕಾಂಟ್ರಾಕ್ರ‍್ಸ್, ಸಂಡೂರಿನ ಸಾಯಿ ಸಾಗರ್ ಎಂಟರ್‌ಪ್ರೆöÊಸಸ್, ಕೊಪ್ಪಳದ ಜ್ಞಾನಬಂಧು ಹಿರಿಯ ಪ್ರಾಥಮಿಕ ಶಾಲೆ, ಗಂಗಾವತಿಯ ನಗರಸಭೆ, ತೋರಣಗಲ್ಲಿನ ಬನಶಂಕರ ರೆಡ್ಡಿ, ಸಬೀರಾ ಸೆಕ್ಯುರಿಟಿ ಸರ್ವೀಸಸ್, ತೋರಣಗಲ್ಲಿನ ವರ್ಷಿಣಿ ಲೈಫ್ ಟೆಕ್&ಅರ್ಥ್ ಮೂವರ್ಸ್. ಹೊಸಪೇಟೆಯ ಕಮಲಾಪುರದ ಭಾರತೀಯ ಪುರಾತತ್ವ ಸರ್ವೇಯ ಹಿರಿಯ ಸಂರಕ್ಷಣಾ ಸಹಾಯಕ, ಬಳ್ಳಾರಿಯ ವಿಶ್ವೇಶ್ವರಯ್ಯ ಎಜುಕೇಶನ್ ಸೊಸೈಟಿ, ಹೊಸಪೇಟೆಯ ಕಮಲಾಪುರದ ಭಾರತೀಯ ಪುರಾತತ್ವ ಇಲಾಖೆಯ ತೋಟಗಾರಿಕೆ ಸಹಾಯಕ, ಬೆಳಗಲ್ -ವಿಲ್ ತುಮಟಿ ರಸ್ತೆಯ ಸಾಯಿ ಸಪ್ತಗಿರಿ ಸ್ಪಾಂಜ್ ಪ್ರೆöÊವೇಟ್ ಲಿಮಿಟೆಡ್, ತೋರಣಗಲ್ಲಿನ ಜಿಂದಾಲ್ ಸ್ಟೀಲ್ಸ್ ಲಿಮಿಟೆಡ್‌ನ ತಿರುಮಲ ಕನ್ಸ÷್ಟçಕ್ಷನ್ಸ್, ಮುನಿರಾಬಾದ್ ನ ಸುರಭಿ ಎಂಟರ್ ಪ್ರೆöÊಸಸ್, ತುಂಗಭದ್ರಾ ಪಲ್ಪ್ ಮತ್ತು ಬೋರ್ಡ್ ಮಿಲ್ಸ್ ಲಿಮಿಟೆಡ್, ಸಂಡೂರು ತಾಲ್ಲೂಕಿನ ತೋರಣಗಲ್ಲಿನ ಬಾಲಾಜಿ ಎಂಟರ್ ಪ್ರೆöÊಸಸ್, ತೋರಣಗಲ್ಲಿನ ಕೆ.ಎಸ್ ಚಂದ್ರಶೇಖರ್ ಮತ್ತು ಚಿತ್ರದುರ್ಗದ ವೇದಾ ಸಿಮೆಂಟ್ಸ್. ಈ ಮೇಲ್ಕಂಡ ಸಂಸ್ಥೆಗಳು ಬಾಕಿ ಇರುವ ಮೊತ್ತವನ್ನು ಕೂಡಲೇ ಪಾವತಿಸುವಂತೆ ಉದ್ಯೋಗದಾತರಿಗೆ ಬಳ್ಳಾರಿ ಇಪಿಎಫ್ ಕಚೇರಿಯು ಕಟ್ಟುನಿಟ್ಟಿನ ಸೂಚನೆ ನೀಡಿದೆ. ತಪ್ಪಿದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಗರದ ರಾಘವೇಂದ್ರ ಕಾಲೋನಿಯ 2ನೇ ಹಂತದ ಮುಖ್ಯ ರಸ್ತೆಯ ‘ಭವಿಷ್ಯ ನಿಧಿ ಭವನ’ದ ಜಾರಿ ಅಥವಾ ವಸೂಲಾತಿ ವಿಭಾಗ ಅಥವಾ ro.bellary@epfindia.gov.in ಗೆ ಇಮೇಲ್ ಮೂಲಕ ಸಂಪರ್ಕಿಸಬಹುದು ಎಂದು ಬಳ್ಳಾರಿ ಪ್ರಾದೇಶಿಕ ಭವಿಷ್ಯ ನಿಧಿಯ ಆಯುಕ್ತ ಕೆ.ವಿ ಪ್ರವೀಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ