ಗುರುವಾರ, ಮೇ 30, 2024

ಅನಾಮಧೇಯ ಮೃತ ವ್ಯಕ್ತಿ ವಾರಸುದಾರರ ಪತ್ತೆಗೆ ಮನವಿ

ಬಳ್ಳಾರಿ,ಮೇ 30(ಕರ್ನಾಟಕ ವಾರ್ತೆ): ತಾಲ್ಲೂಕಿನ ಹಲಕುಂದಿ ಗ್ರಾಮದ ಬಳ್ಳಾರಿ-ಬೆಂಗಳೂರು ರಾ.ಹೆ.151ಎ ಹೊಸಬೈಪಾಸ್ ರಸ್ತೆಯಲ್ಲಿ ಬರುವ ಹೊಸ ಬಸ್‍ನಿಲ್ದಾಣದ ಪಕ್ಕದ ಮಣ್ಣಿನ ಕಾಲುವೆಯ ತಗ್ಗಿನಲ್ಲಿ ಅಂದಾಜು 35-40 ವರ್ಷದ ಅನಾಮಧೇಯ ಮೃತ ವ್ಯಕ್ತಿಯ ಶವವು ಮೇ 29 ರಂದು ಪತ್ತೆಯಾಗಿದ್ದು, ಮೃತನ ವಾರಸುದಾರನ ಪತ್ತೆಗೆ ಸಹಕರಿಸಬೇಕು ಎಂದು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ಠಾಣಾಧಿಕಾರಿ ಮನವಿ ಮಾಡಿದ್ದಾರೆ. ಚಹರೆ ಗುರುತು: ಎತ್ತರ ಸುಮಾರು 5.4 ಇಂಚು, ಕೋಲುಮುಖ, ಗೋಧಿಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಅಂದಾಜು 3 ಇಂಚು ಉದ್ದದ ಬಿಳಿ ಮಿಶ್ರಿತ ಕಪ್ಪು ಕೂದಲು, ಕುರುಚಲು ಹೊಂದಿದ್ದು, ಬಲಗೈಯಲ್ಲಿ ಒಂದು ಸ್ಟೀಲ್ ಕಡಗ, ಎಡಗೈ ಬೆರಳಲ್ಲಿ ಬೆಳ್ಳಿ ಲೋಹದ ಉಂಗುರ ಇದ್ದು, ಮೈಮೇಲೆ ಅರಿಶಿಣ ಮತ್ತು ಕೆಸರಿ ಮಿಶ್ರಿತ ಬಣ್ಣದ ಉಡುದಾರ ಇರುತ್ತದೆ. ಮೃತನ ವಾರಸುದಾರರ ಬಗ್ಗೆ ಮಾಹಿತಿ ಇದ್ದಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಪಿಐ ಮೊ.9480803049 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ