ಬುಧವಾರ, ಫೆಬ್ರವರಿ 25, 2026
ಬಳ್ಳಾರಿ ಮಹಾನಗರ ಪಾಲಿಕೆ: ನಿವೇಶನ ಖರೀದಿ ಮಾಡದಂತೆ ಸೂಚನೆ
ಬಳ್ಳಾರಿ,ಫೆ.25(ಕರ್ನಾಟಕ ವಾರ್ತೆ):
ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ಬಳ್ಳಾರಿ ತಾಲ್ಲೂಕಿನ ವ್ಯಾಪ್ತಿಯ ಅಂದ್ರಾಳ್ ಗ್ರಾಮದ ಸರ್ವೆ ನಂ:101/ಎ ರಲ್ಲಿ ಸಾರ್ವಜನಿಕರು ನಿವೇಶನಗಳನ್ನು ಖರೀದಿ ಮಾಡದಂತೆ ಪಾಲಿಕೆಯ ಉಪ ಆಯುಕ್ತರು (ಕಂದಾಯ) ತಿಳಿಸಿದ್ದಾರೆ.
ಅಂದ್ರಾಳ್ ಗ್ರಾಮದ ಸರ್ವೆ ನಂ:101/ಎ ರ ಆಸ್ತಿಯು ಕರ್ನಾಟಕ ಸರ್ಕಾರದ ಮಾಲೀಕತ್ವದಲ್ಲಿರುವ ಸರ್ಕಾರಿ ಜಮೀನಾಗಿದ್ದು, ದುರುಗಣ್ಣ ತಂದೆ ಸಣ್ಣ ದುರುಗಪ್ಪ, ವಾರ್ಡ್ ನಂ:09, ರಾಮ ನಗರ, ಪೋಲಿ ಮಾರೆಮ್ಮ ಗುಡಿ ಹತ್ತಿರ, ಅಂದ್ರಾಳ್ ಬಳ್ಳಾರಿ ಇವರು ಬಳ್ಳಾರಿ ಮಹಾನಗರ ಪಾಲಿಕೆಯಿಂದ 2025 ರ ಮೇ ಮತ್ತು ಜೂನ್ ತಿಂಗಳಲ್ಲಿ ನಮೂನೆ-2ಎ ಅನಧಿಕೃತ ಬಿ-ಖಾತಾ ಪಡೆದು ಮಾರಾಟ ಮಾಡುವ ಕಾರ್ಯದಲ್ಲಿ ನಿರತರಾಗಿರುವುದು ಕಂಡುಬAದಿದೆ.
ಹಾಗಾಗಿ ಸರ್ವೆ ನಂಬರ್ ನಲ್ಲಿರುವ ಯಾವುದೇ ನಿವೇಶನವನ್ನು ಸಾರ್ವಜನಿಕರು ಖರೀದಿಸಬಾರದು. ಒಂದುವೇಳೆ ಯಾವುದೇ ಸಾರ್ವಜನಿಕರು ಆ ಸರ್ವೆ ನಂಬರ್ ನ ನಿವೇಶನವನ್ನು ಖರೀದಿಸಿದಲ್ಲಿ ಪಾಲಿಕೆಯು ಜವಾಬ್ದಾರಿಯಾಗಿರುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ