ಸೋಮವಾರ, ಜೂನ್ 2, 2025

ಬಳ್ಳಾರಿ: ಗ್ರಾಪಂಗಳಲ್ಲಿ ತೆರವಾದ ಸ್ಥಾನಗಳಿಗೆ ನೂತನವಾಗಿ ಆಯ್ಕೆಯಾದ ಸದಸ್ಯರ ಪಟ್ಟಿ ಪ್ರಕಟ

ಬಳ್ಳಾರಿ,ಜೂ.02(ಕರ್ನಾಟಕ ವಾರ್ತೆ): ಜಿಲ್ಲೆಯ ಕಂಪ್ಲಿ, ಸಿರುಗುಪ್ಪ ಮತ್ತು ಸಂಡೂರು ತಾಲ್ಲೂಕುಗಳ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾದ ಸ್ಥಾನಗಳಿಗೆ ಈಗಾಗಲೇ ಚುನಾವಣೆ ನಡೆಸಲಾಗಿದ್ದು, ಹೊಸದಾಗಿ ಆಯ್ಕೆಯಾದ ಸದಸ್ಯರ ಪಟ್ಟಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. *ಪಟ್ಟಿ:* *ಕಂಪ್ಲಿ ತಾಲ್ಲೂಕು:* ದೇವಸಮುದ್ರ ಗ್ರಾಪಂ-ಅವಿರೋಧವಾಗಿ ಶರಣಮ್ಮ(ಸಾಮಾನ್ಯ ಮಹಿಳೆ) ಆಯ್ಕೆ. ದೇವಲಾಪುರ ಗ್ರಾಪಂ-ಅವಿರೋಧವಾಗಿ ಕುರಿ ಕರಿಬಸಪ್ಪ(ಸಾಮಾನ್ಯ). *ಸಿರುಗುಪ್ಪ:* ರಾವಿಹಾಳು ಗ್ರಾಪಂ: ಅವಿರೋಧವಾಗಿ ಸುವರ್ಣ(ಅನುಸೂಚಿತ ಪಂಗಡ ಮಹಿಳೆ) ಆಯ್ಕೆ. *ಸಂಡೂರು:* ಮೆಟ್ರಿಕಿ: ಅವಿರೋಧವಾಗಿ ಉಮಾದೇವಿ(ಅನುಸೂಚಿತ ಪಂಗಡ ಮಹಿಳೆ) ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ. --------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ