ಗುರುವಾರ, ಜನವರಿ 2, 2025

ವೃತ್ತ ಮತ್ತು ರಸ್ತೆಗಳ ನಾಮಕರಣ; ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ

ಬಳ್ಳಾರಿ,ಜ.02(ಕರ್ನಾಟಕ ವಾರ್ತೆ): ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ವಾರ್ಡ್ಗಳ ರಸ್ತೆ ಹಾಗೂ ವೃತ್ತಗಳಿಗೆ ಮರುನಾಮಕರಣ ಮಾಡಲಾಗುತ್ತಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳೇನಾದರು ಇದ್ದಲ್ಲಿ ಸಲ್ಲಿಸಬಹುದು. ಪಾಲಿಕೆ ವ್ಯಾಪ್ತಿಯ 05 ನೇ ವಾರ್ಡ್ನ ಕಾರ್ಕಲತೋಟ ಮುಖ್ಯ ರಸ್ತೆಯಲ್ಲಿನ (ಸರ್ಕಾರಿ ಶಾಲೆ ಹಿಂಭಾಗ) ವೃತ್ತವನ್ನು “ನಂದಮೂರಿ ತಾರಕ ರಾಮರಾವ್” ವೃತ್ತ ಮತ್ತು ಕಾರ್ಕಲತೋಟ ಮುಖ್ಯ ರಸ್ತೆಯನ್ನು “ನಂದಮೂರಿ ತಾರಕ ರಾಮರಾವ್” ರಸ್ತೆ ಎಂದು ನಾಮಕರಣ, ವಾರ್ಡ್ ನಂ.08 ರ ಆಕ್ಟಾçಯ್ ವೃತ್ತವನ್ನು ಗೋಮಾತಾ ವೃತ್ತ ಎಂದು, ಕೌಲ್‌ಬಜಾರ್ ರಸ್ತೆಯ ಒಂದನೇ ರೈಲ್ವೇ ಗೇಟ್ ಹತ್ತಿರದ (ಫ್ಲೆöÊಓವರ್) ಇರುವ ವೃತ್ತವನ್ನು ಶ್ರೀ ಮೌಲಾನ ಅಬ್ದುಲ್ ಕಲಾಂ ಅಜಾದ್ ವೃತ್ತ ಎಂದು ನಾಮಕರಣ ಮಾಡುವುದಾಗಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಈ ಕುರಿತು ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳಿದ್ದಲ್ಲಿ 30 ದಿನದೊಳಗಾಗಿ ಲಿಖಿತ ರೂಪದಲ್ಲಿ ಪಾಲಿಕೆ ಕಚೇರಿಗೆ ಸಲ್ಲಿಸಬಹುದು. ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗದಿದ್ದಲ್ಲಿ ಸರ್ಕಾರದ ಸುತ್ತೋಲೆ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ