ಶನಿವಾರ, ಡಿಸೆಂಬರ್ 2, 2023
ಸಿರುಗುಪ್ಪ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಡಿ.05ರಂದು
ಬಳ್ಳಾರಿ,ಡಿ.02(ಕರ್ನಾಟಕ ವಾರ್ತೆ):
ಸಿರುಗುಪ್ಪ ತಾಲ್ಲೂಕಿನ ವ್ಯಾಪ್ತಿಯಲ್ಲಿ 33/11 ಕೆವಿ ರುದ್ರಪಾದ ವಿದ್ಯುತ್ ವಿತರಣಾ ಕೇಂದ್ರದ ಹಾಗೂ ಮಾರ್ಗದ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವ ಡಿ.05ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಣ್ಣೂರು,ಸೂಗೂರು, ಮುದ್ದಟ್ನೂರು, ರುದ್ರಪಾದ,ನಡವಿ, ದೋಡ್ಡರಾಜ ಕ್ಯಾಂಪ್,ಮಡೆ ಕ್ಯಾಂಪ್, ಕವಳೆ ಬಸವೇಶ್ವರ ಕ್ಯಾಂಪ್, ಲಕ್ಷ್ಮೀನಗರ ಕ್ಯಾಂಪ್, ಹಾವಿನಹಾಳ್, ಮಾಳಾಪುರ, ಚೆನ್ನಪಟ್ಟಣ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವುದರಿಂದ ರೈತರು ಮತ್ತು ಇತರೆ ಗ್ರಾಹಕರು ಸಹಕರಿಸಬೇಕೆಂದು ಎಂದು ಸಿರುಗುಪ್ಪ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ರವಿ ಸಿಂಧು.ಎನ್ ಅವರು ತಿಳಿಸಿದ್ದಾರೆ.
--------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ