ಗುರುವಾರ, ಅಕ್ಟೋಬರ್ 31, 2024

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆಯ ಇಬ್ಬರು ಆಯ್ಕೆ; ಜಿಲ್ಲಾಡಳಿತದಿಂದ ಅಭಿನಂದನೆ

ಬಳ್ಳಾರಿ,ಅ.31(ಕರ್ನಾಟಕ ವಾರ್ತೆ): ನ.01 ರಂದು ಆಚರಿಸುತ್ತಿರುವ 69ನೇ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ನೀಡಲಾಗುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಬಳ್ಳಾರಿ ಜಿಲ್ಲೆಯ ಅಶ್ವ ರಾಮಣ್ಣ ಮತ್ತು ವಿರೂಪಾಕ್ಷಪ್ಪ ನೇಕಾರ ಅವರು ಆಯ್ಕೆಯಾಗಿದ್ದಾರೆ. ಅಶ್ವ ರಾಮಣ್ಣ ಅವರು ಜಾನಪದ ಕ್ಷೇತ್ರದಲ್ಲಿ ಮತ್ತು ವಿರೂಪಾಕ್ಷಪ್ಪ ನೇಕಾರ ಸಹಕಾರ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಜಿಲ್ಲಾಡಳಿತವು ಅಭಿನಂದಿಸಿದೆ. -----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ