ಬುಧವಾರ, ಅಕ್ಟೋಬರ್ 30, 2024

ಪಿಂಚಣಿದಾರರ ಮನೆಬಾಗಿಲಿಗೆ ಜೀವನ್ ಪ್ರಮಾಣ ಪತ್ರ; ನ.04 ರಿಂದ ವಿಶೇಷ ಶಿಬಿರ

ಬಳ್ಳಾರಿ,ಅ.30(ಕರ್ನಾಟಕ ವಾರ್ತೆ): ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್, ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯ ಮತ್ತು ರಾಷ್ಟಿçÃಯ ಮಾಹಿತಿ ಕೇಂದ್ರ ಸಮನ್ವಯದೊಂದಿಗೆ ಎಲ್ಲಾ ಕೇಂದ್ರ, ರಾಜ್ಯ ಮತ್ತು ಉದ್ಯೋಗಿಗಳ ಭವಿಷ್ಯನಿಧಿಯ ಸಂಸ್ಥೆ ಪಿಂಚಣಿದಾರರಿಗೆ ಜೀವನ್ ಪ್ರಮಾಣ ಪತ್ರವನ್ನು ನೀಡಲು ಸುಲಭವಾಗುವಂತೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೇವೆ ಪರಿಚಯಿಸಿದೆ. ಅಂಚೆಪೇದೆ ಮತ್ತು ಗ್ರಾಮೀಣ ಅಂಚೆ ಸೇವಕರಿಂದ ಪಿಂಚಣಿದಾರರಿಗೆ ಅನುಕೂಲಕ್ಕಾಗಿ ಅವರ ಮನೆಬಾಗಿಲಲ್ಲಿಯೇ ಆಧಾರ್ ಮತ್ತು ಪಿಂಚಣಿ ವಿವರಗಳನ್ನು ಬಳಸಿಕೊಂಡು ಡಿಜಿಟಲ್ ಜೀವನ್ ಪ್ರಮಾಣ ವಿತರಿಸುವ ವಿಶೇಷ ಅಭಿಯಾನವನ್ನು ನವೆಂಬರ್ 1 ರಿಂದ ನವೆಂಬರ್ 30 ವರೆಗೆ ಹಮ್ಮಿಕೊಂಡಿದ್ದು, ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಅಥವಾ ತಮ್ಮ ಭಾಗದ ಅಂಚೆ ಬಟವಾಡೆಗೆ ಬರುವ ಅಂಚೆ ಸಿಬ್ಬಂದಿಯನ್ನು ಸಂಪರ್ಕಿಸಿ ಮನೆಯಲ್ಲಿಯೇ ಕುಳಿತು ಬೆರಳಚ್ಚು ಅಥವಾ ಮುಖಚಹರೆಯನ್ನು ನೀಡಿ ತಮ್ಮ ಜೀವನ ಪ್ರಮಾಣ ಪತ್ರ ಪಡೆಯಬಹುದು. ಈ ಅಭಿಯಾನದ ಭಾಗವಾಗಿ ಬಳ್ಳಾರಿ ಅಂಚೆ ವಿಭಾಗದ ವ್ಯಾಪ್ತಿಯಲ್ಲಿ ವಿಶೇಷ ಡಿಎಲ್‌ಸಿ ನೋಂದಣಿ ಶಿಬಿರ ಹಮ್ಮಿಕೊಳ್ಳಲಾಗಿದೆ. ನ.04 ರಂದು ಬಳ್ಳಾರಿ ಪ್ರಧಾನ ಅಂಚೆ ಕಚೇರಿ, ನ.08 ರಂದು ಹೊಸಪೇಟೆ ಪ್ರಧಾನ ಅಂಚೆಕಚೇರಿ, ನ.16 ರಂದು ಕೂಡ್ಲಿಗಿ ಅಂಚೆ ಕಚೇರಿ, ನ.25 ರಂದು ಸಿರುಗುಪ್ಪ ಅಂಚೆ ಕಚೇರಿ, ನ.23 ರಂದು ಹರಪನಹಳ್ಳಿ ಅಂಚೆ ಕಚೇರಿ ವ್ಯಾಪ್ತಿಯಲ್ಲಿ ಶಿಬಿರಗಳನ್ನು ಏರ್ಪಡಿಸಲಾಗಿದ್ದು, ಎಲ್ಲಾ ಪಿಂಚಣಿದಾರರು ಈ ಸೇವೆಯ ಸದುಪಯೋಗ ಪಡೆಯಬೇಕು. ಈ ಸೇವೆಗಾಗಿ ಪಿಂಚಣಿದಾರರು ರೂ.70 ಶುಲ್ಕ ಪಾವತಿಸಿ ತಮ್ಮ ಆಧಾರ್ ಪ್ರತಿ ಮತ್ತು ಪಿಂಚಣಿ ಬಗೆಗಿನ ವಿವರ ನೀಡಬೇಕು. ಈ ಡಿಎಲ್‌ಸಿ ಪ್ರಕ್ರಿಯೆಯು, ಪಿಂಚಣಿದಾರರಿಗೆ ಸಾಂಪ್ರದಾಯಿಕ ಕಾಗದ ಆಧಾರಿತ ಪ್ರಮಾಣಪತ್ರಗಳನ್ನು ಸಲ್ಲಿಸುವ ಅಗತ್ಯವನ್ನು ನಿವಾರಿಸುತ್ತದೆ ಮತ್ತು ಜೀವನ ಪ್ರಮಾಣಪತ್ರ ಸಲ್ಲಿಕೆಗೆ ಸುಲಭವಾದ ಪ್ರಕ್ರಿಯೆ ಒದಗಿಸುತ್ತದೆ. ಈ ಪ್ರಮಾಣ ಪತ್ರ ವಿತರಿಸುವ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಪಿಂಚಣಿದಾರರು ತಮ್ಮ ಮೊಬೈಲ್‌ನಲ್ಲಿ ದೃಢೀಕರಣ ಸಂದೇಶ ಪಡೆಯುತ್ತಾರೆ ಹಾಗೂ ಎರಡು ದಿನಗಳ ನಂತರ ಜೀವನ್ ಪ್ರಮಾಣ ಪತ್ರವನ್ನು https://jeevanpramaan.gov.in/ppouser/login ವೆಬ್‌ಸೈಟ್‌ನ ಮೂಲಕ ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು ಎಂದು ಬಳ್ಳಾರಿ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯ ಅಂಚೆ ಅಧೀಕ್ಷಕ ಪಿ.ಚಿದಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ