ಗುರುವಾರ, ಜುಲೈ 20, 2023
ಪುರುಷರಿಗೆ ಸರಳವಾದ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆ ಎನ್ಎಸ್ವಿ ಅನುಸರಿಸಲು ಮನವೊಲಿಸಿ: ಡಾ.ಚಂದ್ರಕಲಾ
ಬಳ್ಳಾರಿ,ಜು.20(ಕರ್ನಾಟಕ ವಾರ್ತೆ):
ಜನಸಂಖ್ಯಾ ನಿಯಂತ್ರಣಕ್ಕೆ ಸಂತಾನ ನಿರೋಧಕ ಶಸ್ತ್ರಚಿಕಿತ್ಸೆಯ ಕುಟುಂಬ ಕಲ್ಯಾಣ ವಿಧಾನಗಳನ್ನು ಅನುಸರಿಸಲು ಜಾಗೃತಿ ನೀಡಿರಿ, ಅದರಲ್ಲೂ ಪುರುಷರಿಗೆ ಗಾಯವಿಲ್ಲದ, ಹೊಲಿಗೆ ಇಲ್ಲದ ನೊಸ್ಕಾಲ್ಪೇಲ್ ವ್ಯಾಸಕ್ಟುಮಿ (ಎನ್ಎಸ್ವಿ) ಶಸ್ತ್ರಚಿಕಿತ್ಸೆಯನ್ನು ವ್ಯಾಪಕ ಪ್ರಚಾರ ಕೈಗೊಂಡು ಅರ್ಹ ಪುರುಷರ ಮನವೊಲಿಸಬೇಕು ಎಂದು ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಕುಟುಂಬ ಕಲ್ಯಾಣ ವಿಭಾಗ ನಿರ್ದೇಶನಾಲಯದ ಉಪ ನಿರ್ದೇಶಕಿ ಡಾ.ಚಂದ್ರಕಲಾ ಅವರು ಸೂಚಿಸಿದರು.
ಅವರು ಗುರುವಾರದಂದು ಜಿಲ್ಲಾ ಆಸ್ಪತ್ರೆ ಮತ್ತು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ(ವಿಮ್ಸ್)ಗೆ ಭೇಟಿ ನೀಡಿ ಹೆರಿಗೆ ವಿಭಾಗ, ಪ್ರಯೋಗಾಲಯ, ವಾರ್ಡ್ಗಳ ಪರಿಶೀಲನೆ, ಮಕ್ಕಳ ಜನನದ ಮಧ್ಯ ಅಂತರವಿಡುವ ಕಾಪರ್-ಟಿ, ಮಾಲಾ, ಛಾಯಾ ನುಂಗುವ ಮಾತ್ರೆಗಳು ಹಾಗೂ ಅತ್ಯಂತ ಸರಳವಾದ, ಅಂತರ ಚುಚ್ಚುಮದ್ದುವಿಗೆ ಆದ್ಯತೆ ನೀಡಲು ಮತ್ತು ಜನಸಂಖ್ಯಾ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರಕ್ಕಾಗಿ ಸೂಚಿಸಿದರು.
ಮಹಿಳೆಯರಿಗೆ ಲ್ಯಾಪೆÇ್ರೀಸ್ಕೋಪಿಕ್ ಮತ್ತು ಟ್ಯುಬೆಕ್ಟುಮಿ ಶಸ್ತ್ರಚಿಕಿತ್ಸೆಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲು ಕ್ರಮವಹಿಸಿ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಈಗಾಗಲೇ ಶಿಬಿರಗಳ ಆಯೋಜನೆ ಮಾಡಲಾಗುತ್ತಿದ್ದು, ತಜ್ಞವೈದ್ಯರನ್ನು ನಿಯೋಜಿಸಿಕೊಂಡು ಹೆಚ್ಚು ಹೆಚ್ಚು ಶಿಬಿರಗಳನ್ನು ಆಯೋಜಿಸಿ ಜನಸಂಖ್ಯೆ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿ ಅನುಷ್ಟಾನ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್.ಜನಾರ್ಧನ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಟಾನ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಯುನಿಸೆಫ್ ಅಧಿಕಾರಿಗಳಾದ ಡಾ.ಲಲಿತಾ, ಶಿಲ್ಪಾ, ಸಹಾಯಕ ಸಾಂಖೀಕ ಅಧಿಕಾರಿ ಡಾ.ರಾಘವೇಂದ್ರ ಶಾನಭೋಗರ, ಗೋಪಾಲ, ಅರುಣಕುಮಾರ ಸೇರಿದಂತೆ ವೈದ್ಯರು, ಸಿಬ್ಬಂದಿಯವರು ಹಾಜರಿದ್ದರು.
-------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)




ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ