ಶುಕ್ರವಾರ, ಜುಲೈ 28, 2023

ರೈತರು ಭತ್ತದಲ್ಲಿ “ಕೂರಿಗೆ ಬಿತ್ತನೆ” ಅಳವಡಿಸಿಕೊಳ್ಳಲು ಸಲಹೆ

ಬಳ್ಳಾರಿ,ಜು.28(ಕರ್ನಾಟಕ ವಾರ್ತೆ): ತುಂಗಭದ್ರಾ ಜಲಾಶಯದಲ್ಲಿ ಈ ಭಾರಿ ನೀರಿನ ಕೊರತೆಯಿಂದ ಕಾಲುವೆಗಳಿಗೆ ಸಕಾಲಕ್ಕೆ ನೀರು ಹರಿಸುವುದು ವಿಳಂಬವಾಗುವುದರಿಂದ ಭತ್ತ ನಾಟಿ ಬದಲು ಭತ್ತದ ಕೂರಿಗೆ ಬಿತ್ತನೆ ಪದ್ಧತಿ ಅಳವಡಿಸಿಕೊಳ್ಳುವಂತೆ ರೈತರಿಗೆ ವಿಜ್ಞಾನಿಗಳು, ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಸಹಾಯಕ ಕೃಷಿ ನಿರ್ದೇಶಕರು, ಈ ವರ್ಷ ಸಮರ್ಪಕ ಮಳೆ ಬೀಳದ ಕಾರಣ ರೈತರು ಭತ್ತದ ಸಸಿ ಮಾಡಿ, ನಾಟಿ ಪದ್ಧತಿ ಕೈಬಿಟ್ಟು ಭತ್ತದ ಕೂರಿಗೆ ಬಿತ್ತನೆ ಆಳವಡಿಸಿಕೊಳ್ಳುವಲ್ಲಿ ಮುಂದಾಗಬೇಕು ಎಂದು ತಿಳಿಸಿದ್ದಾರೆ. ಕೂರಿಗೆ ಬಿತ್ತನೆ ಪದ್ಧತಿ ಅಳವಡಿಸಿಕೊಳ್ಳುವುದರಿಂದ ಭತ್ತದ ಸಸಿ ಆರೈಕೆ, ಸಸಿ ಮಡಿ ಸಿದ್ದತೆ ಮಾಡುವ ಖರ್ಚನ್ನು ಉಳಿಸಬಹುದು. ಇಳುವರಿ ಪ್ರಮಾಣವೂ ಹೆಚ್ಚು ಪಡೆಯಬಹುದು. ಕೂರಿಗೆ ಬಿತ್ತನೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ/ಸಹಾಯಕ ಕೃಷಿ ನಿರ್ದೇಶಕರ ಕಚೇರಿ/ಕೃಷಿ ವಿಜ್ಞಾನ ಕೇಂದ್ರ ಇವರಿಗೆ ಸಂಪರ್ಕಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ದಯಾನಂದ ಅವರು ತಿಳಿಸಿದ್ದಾರೆ. ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ