ಮಂಗಳವಾರ, ಜನವರಿ 30, 2024

ಯುವಕ ಕಾಣೆ ನಾಪತ್ತೆ: ಪತ್ತೆಗೆ ಮನವಿ

ಬಳ್ಳಾರಿ,ಜ.30(ಕರ್ನಾಟಕ ವಾರ್ತೆ): ತೋರಣಗಲ್ಲು ಪೆÇೀಲಿಸ್ ಠಾಣೆ ವ್ಯಾಪ್ತಿಯ ಜಿಂದಾಲ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದ 25 ವರ್ಷದ ಶ್ರೀ ರಾಮ್ ಸಾಯಿ ಕುಮಾರ್ ಎನ್ನುವ ಯುವಕ ಜ.23ರಂದು ಕಾಣೆಯಾದ್ದು ಪತ್ತೆಗೆ ಸಹಕರಿಸಬೇಕೆಂದು ತೋರಣಗಲ್ಲು ಪೆÇೀಲಿಸ್ ಠಾಣೆಯ ತನಿಖಾ ಪೆÇೀಲಿಸ್ ಸಬ್ ಇನ್ಸ್‍ಪೆಕ್ಟರ್ ಅವರು ಮನವಿ ಮಾಡಿದ್ದಾರೆ. ಯುವಕನ ಚಹರೆ ಗುರುತು: ಎತ್ತರ 5.4 ಅಡಿ, ದುಂಡು ಮುಖ, ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೋಂದಿದ್ದು, ತೆಲುಗು,ಹಿಂದಿ ಮತ್ತು ಇಂಗ್ಲಿಷ್ ಭಾಷೆ ಮಾತನಾಡುತ್ತಾನೆ. ಕಾಣೆಯಾದ ಸಂಧರ್ಭದಲ್ಲಿ ಗ್ರೀನ್ ಕಲರ್ ಟೀ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮೇಲ್ಕಂಡ ಚಹರೆಯುಳ್ಳ ಯುವಕನ ಮಾಹಿತಿ ಸಿಕ್ಕಲ್ಲಿ ತೋರಣಗಲ್ಲು ಪೆÇೀಲಿಸ್ ಠಾಣೆ ದು: 08395250100 ಅಥವಾ ತೋರಣಗಲ್ಲು ಪೆÇೀಲಿಸ್ ಠಾಣೆ ಪಿ.ಎಸ್.ಐ ಮೊ: 9480803062 ಇವರಿಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಕೋರಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ