ಗುರುವಾರ, ಮೇ 25, 2023
ಯುವರಾಜ ದಿಬ್ಬದಳ್ಳಿ ಅವರಿಗೆ ಪಿಎಚ್ಡಿ ಪದವಿ
ಬಳ್ಳಾರಿ,ಮೇ 25(ಕರ್ನಾಟಕ ವಾರ್ತೆ):
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯವು ಯುವರಾಜ ದಿಬ್ಬದಳ್ಳಿ ಅವರಿಗೆ “ಡಾಕ್ಟರ್ ಆಫ್ ಫಿಲಾಸಫಿ” ಪದವಿ ಘೋಷಿಸಿದೆ.
ವಿಶ್ವವಿದ್ಯಾಲಯದ ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಮ್.ಕೆ.ಅಂಶೂಮಾಲಿ ಅವರ ಮಾರ್ಗದರ್ಶನದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ “ಹೆಟೆರೊ-ಬೈನ್ಯೂಕ್ಲಿಯರ್ ಮೆಟಾಲೋಸೀನ್ಸ್ ಡಿರೈವ್ಡ್ ಫ್ರಮ್ ಗ್ರೂಪ್ Iಗಿ ಟ್ರಾನ್ಸಿಷನ್ ಮೆಟಲ್ ಕ್ಯಾಟಲಿಸ್ಟ್ ವಿತ್ ಸ್ಟಬಿಲೈಸ್ಡ್ ಕ್ಯಾಟಯಾನಿಕ್ ಸೆಂಟರ್” (Hetero-Binuclear Metallocenes Derived From Group Iv Transition Metal Catalyst With Stabilized Cationic Center) ಎಂಬ ಮಹಾಪ್ರಬಂಧ ಮಂಡನೆಗೆ ವಿಶ್ವವಿದ್ಯಾಲಯವು “ಡಾಕ್ಟರ್ ಆಫ್ ಫಿಲಾಸಫಿ” ಪದವಿಯನ್ನು ಘೋಷಣೆ ಮಾಡಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿ.ವಿ ಯು ಪ್ರಕಟಣೆಯಲ್ಲಿ ತಿಳಿಸಿದೆ.
------
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ