ಬುಧವಾರ, ಮೇ 31, 2023

ಅನಾಮಧೇಯ ಮೃತ ವ್ಯಕ್ತಿಯ ಶವ ಪತ್ತೆ; ವಾರಸುದಾರರ ಪತ್ತೆಗೆ ಮನವಿ ಬಳ್ಳಾರಿ,ಮೇ 31(ಕರ್ನಾಟಕ ವಾರ್ತೆ): ನಗರದ ರೈಲ್ವೇ ನಿಲ್ದಾಣದ ವೇದಿಕೆ ನಂ 02 ರಲ್ಲಿ ಗುಂತಕಲ್ ಎಂಡ್ ಕಡೆ ಇರುವ ಫುಟ್ ಓವರ್ ಬ್ರಿಡ್ಜ್ ಮೇಲಿಂದ ಸುಮಾರು 60 ವರ್ಷದ ಅನಾಮಧೇಯ ವ್ಯಕ್ತಿ ಅಕಸ್ಮಿಕವಾಗಿ ಬಿದ್ದು, ಮೇ 31 ರಂದು ಸಾವನ್ನಪ್ಪಿರುತ್ತಾನೆ. ಮೃತನ ವಾರಸುದಾರನ ಪತ್ತೆಗಾಗಿ ಸಹಕರಿಸಬೇಕು ಎಂದು ರೈಲ್ವೇ ಪೊಲೀಸ್ ಠಾಣೆಯು ಪ್ರಕಟಣೆ ಹೊರಡಿಸಿದೆ. ಚಹರೆ ಗುರುತು: ಸುಮಾರು 5.5 ಅಡಿ ಎತ್ತರ, ಸಾಧರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ, ತಲೆಯಲ್ಲಿ ಸುಮಾರು ಎರಡರಿಂದ ಮೂರು ಇಂಚು ಬಿಳಿ ಕೂದಲು ಹಾಗೂ ಬಿಳಿಯ ಮೀಸೆ ಬಿಟ್ಟಿರುತ್ತಾನೆ. ಬಲಗಾಲಿನ ಪಾದದ ಬಳಿ ಹಳೆಯ ಗಾಯದ ಗುರುತು ಇದ್ದು, ಬಲಗೈ ಅಂಗೈ ಮೇಲೆ ಪೃಥ್ವಿ ಸಿದ್ಧಲಿಂಗಮ್ಮ ಅಂತ ಹಚ್ಚೆ ಗುರುತು ಇದ್ದು, ಎಡಗೈ ಅಂಗೈ ಮೇಲೆ ಮಂಜ ರವಿ ಎಂದು ಹಚ್ಚೆ ಗುರುತು ಇರುತ್ತದೆ. ಮೈ ಮೇಲಿನ ಬಟ್ಟೆಗಳು: ಟರ್ಕಿ ಟವಲ್, ಕರಿ ನೀಲಿ ಬಣ್ಣದ ಪ್ಯಾಂಟ್, ನೇರಳೆ ಬಣ್ಣದ ಟೀ ಶರ್ಟ್ ಧರಿಸಿಸುತ್ತಾನೆ. ಮೃತನ ವಾರಸುದಾರರು ಪತ್ತೆಯಾದಲ್ಲಿ ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರ ಮೊ.9480802131, ರಾಯಚೂರು ರೈಲ್ವೇ ಪೊಲೀಸ್ ವೃತ್ತದ ಪೊಲೀಸ್ ವೃತ್ತದ ಉಪನಿರೀಕ್ಷಕರ ಮೊ.9480800471 ಗೆ ಸಂಪಕಿಸಬಹುದಾಗಿದೆ. ----

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ