ಮಂಗಳವಾರ, ಏಪ್ರಿಲ್ 4, 2023

ವ್ಯಕ್ತಿ ಕಾಣೆಯ: ಪ್ರಕರಣ ದಾಖಲು ಬಳ್ಳಾರಿ,ಏ.04(ಕರ್ನಾಟಕ ವಾರ್ತೆ): ಹೊಸಪೇಟೆಯ ಮೂಲ ನಿವಾಸಿ ಬಳ್ಳಾರಿ ನಗರಕ್ಕೆ ಸುಮಾರು ಮೂರು ವರ್ಷದ ಹಿಂದೆ ಶಿವಲಿಂಗನಗರದಲ್ಲಿ ನಿವಾಸಿ ಗೋವಿಂದರಾಜ್ ಎನ್ನುವ 44 ವರ್ಷದ ವ್ಯಕ್ತಿಯು ಮಾ.28ರಂದು ಕಾಣೆಯಾಗಿದು. ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಸಹಾಯಕ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಅವರು ತಿಳಿಸಿದ್ದಾರೆ. ಚಹರೆ ಗುರುತು: 5.6 ಅಡಿ ಎತ್ತರ, ಎಣ್ಣೆಕೆಂಪು ಮೈಬಣ್ಣ, ಕೋಲು ಮುಖ, ತೆಳುವಾದ ಮೈಕಟ್ಟು, ನೀಲಿ ಮತ್ತು ಬಿಳಿ ಬಣ್ಣದ ಗೆರೆಗಳ ಟಿ ಶರ್ಟ್ ಹಾಗೂ ನೀಲಿ ಬಣ್ಣದ ಜರ್ಕಿನ್, ನೀಲಿ ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾನೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಕೌಲ್‍ಬಜಾರ್ ಪೊಲೀಸ್ ಠಾಣೆಯ ದೂ.08392-240731,244145 ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100, ಕೌಲ್ ಬಜಾರ್ ಠಾಣೆಯ ಪಿಐ ಮೊ.9480803047, ಪಿಎಸ್‍ಐ ಮೊ.94808203085 ಗೆ ಸಂಪರ್ಕಿಸಬಹುದಾಗಿದೆ ------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ