ಗುರುವಾರ, ಜೂನ್ 18, 2026

ಸಿರುಗುಪ್ಪ: ಜೂ.20 ರಂದು ವಿದ್ಯುತ್ ವ್ಯತ್ಯಯ

ಬಳ್ಳಾರಿ,ಜೂ.18(ಕರ್ನಾಟಕ ವಾರ್ತೆ): ಸಿರುಗುಪ್ಪ ಜೆಸ್ಕಾಂ ವತಿಯಿಂದ ಹೊಸ 110 ಕೆವಿ ಡಬಲ್ ಸರ್ಕ್ಯೂಟ್ ಲೈನ್‌ನ ಕಂಡಕ್ಟರ್ ಅಳವಡಿಕೆ (ಸ್ಟಿçಂಗಿAಗ್) ಕಾರ್ಯ ಕೈಗೊಳ್ಳುತ್ತಿರುವುದರಿಂದ ಜೂ.20 ರಂದು ಬೆಳಿಗ್ಗೆ 08 ರಿಂದ ಸಂಜೆ 05 ಗಂಟೆಯವರೆಗೆ ಸಿರುಗುಪ್ಪ ಉಪವಿಭಾಗದ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಹೊಸದಾಗಿ ನಿರ್ಮಿಸಲಾಗುತ್ತಿರುವ 110 ಕೆವಿ ಎಂ.ಯು.ಎಸ್.ಎಸ್ ಶ್ರೀಧರಗಡ್ಡೆ ವಿದ್ಯುತ್ ಲೈನ್‌ಗಾಗಿ ಹೊಸ ಡಿಸಿ ಟವರ್‌ಗಳ ಲೋಕೇಶನ್ ಸಂಖ್ಯೆ 08 ರಿಂದ 13 ರವರೆಗಿನ 1.716 ಕಿ.ಮೀ ದೂರದ ವ್ಯಾಪ್ತಿಯಲ್ಲಿ ಕಂಡಕ್ಟರ್ ಅಳವಡಿಸುವ ಕಾಮಗಾರಿ ನಡೆಯಲಿದೆ. ಈ ಹೊಸ ಲೈನ್ ಹಾಲಿ ಇರುವ 33 ಕೆವಿ ಸಿರುಗುಪ್ಪ-ಹಚ್ಚೊಳ್ಳಿ ಲೈನ್ ಅನ್ನು ಕ್ರಾಸ್ ಮಾಡುವುದರಿಂದ ಸುರಕ್ಷತೆಯ ದೃಷ್ಟಿಯಿಂದ ವಿದ್ಯುತ್ ನಿಲುಗಡೆ ಅನಿವಾರ್ಯವಾಗಿದೆ. 33 ಕೆವಿ ಎಂ.ಯು.ಎಸ್.ಎಸ್ ಹಚ್ಚೊಳ್ಳಿ ವ್ಯಾಪ್ತಿಯ ಹಚ್ಚೊಳ್ಳಿ, ಹೊನ್ನಾರಹಳ್ಳಿ, ಶ್ರೀಧರಗಡ್ಡೆ, ಚಿಕ್ಕಬಳ್ಳಾರಿ, ಕುಡುದರಹಾಳ್, ಮಾಟೂರು, ಬೀರಳ್ಳಿ, ಬಸರಹಳ್ಳಿ, ಎ.ಕೆ.ಹಾಳ್, ಕೆ.ಕೆ.ಹಾಳ್, ಕೊತ್ತಲಚಿಂತೆ, ಗುಬ್ಬಿಹಾಳ್ ಮತ್ತು ಸುತ್ತಮುತ್ತಲಿನ ಗ್ರಾಮಗಳು. ಹಾಗಾಗಿ ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ. --------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ