ಶನಿವಾರ, ಜೂನ್ 20, 2026

ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬಳ್ಳಾರಿ,ಜೂ.20(ಕರ್ನಾಟಕ ವಾರ್ತೆ): ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಶಿಕ್ಷಕರು ಹಾಗೂ ಅತಿಥಿ ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಗಾಂಧಿತತ್ವ ಆಧಾರಿತ ವಸತಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ನೇಮಕಾತಿ ನಡೆಯಲಿದೆ. *ಖಾಲಿ ಇರುವ ಹುದ್ದೆಗಳ ವಿವರ:* *ಅತಿಥಿ ಶಿಕ್ಷಕರು (ಶಾಲಾ ವಿಭಾಗ):* ಕನ್ನಡ (8), ಇಂಗ್ಲಿಷ್ (7), ಹಿಂದಿ (2), ವಿಜ್ಞಾನ (9), ಗಣಿತ (8), ಕಂಪ್ಯೂಟರ್ ಸೈನ್ಸ್ (8) ಮತ್ತು ದೈಹಿಕ ಶಿಕ್ಷಣ (5) ಸೇರಿದಂತೆ ಒಟ್ಟು 47 ಹುದ್ದೆಗಳು ಖಾಲಿ ಇವೆ. *ಅತಿಥಿ ಉಪನ್ಯಾಸಕರು (ಪಿ.ಯು ಕಾಲೇಜು ವಿಭಾಗ):* ಕೆಆರ್‌ಸಿಆರ್‌ಎಸ್ ವಾದಿನಕಟ್ಟೆ ಪಿ.ಯು ಕಾಲೇಜಿನಲ್ಲಿ ಕನ್ನಡ, ಇಂಗ್ಲಿಷ್, ಭೌತಶಾಸ್ತç, ರಸಾಯನಶಾಸ್ತç, ಗಣಿತ, ಜೀವಶಾಸ್ತç ಮತ್ತು ಕಂಪ್ಯೂಟರ್ ಸೈನ್ಸ್ ವಿಷಯಗಳಿಗೆ ತಲಾ 1 ರಂತೆ ಒಟ್ಟು 7 ಹುದ್ದೆಗಳು ಖಾಲಿ ಇವೆ. *ಶೈಕ್ಷಣಿಕ ಅರ್ಹತೆಗಳು:* *ಅತಿಥಿ ಶಿಕ್ಷಕರು:* ಸಂಬAಧಪಟ್ಟ ವಿಷಯಗಳಲ್ಲಿ ಪದವಿ ಜೊತೆಗೆ ಬಿ.ಇಡಿ ಮತ್ತು ಟಿ.ಇ.ಟಿ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು. *ಕಂಪ್ಯೂಟರ್ ಶಿಕ್ಷಕರು:* ಬಿ.ಸಿ.ಎ. ಅಥವಾ ಬಿ.ಎಸ್ಸಿ ಕಂಪ್ಯೂಟರ್ಸ್ ಅಥವಾ ಬಿ.ಇ. ಪದವಿ ಹೊಂದಿರಬೇಕು. *ದೈಹಿಕ ಶಿಕ್ಷಣ ಶಿಕ್ಷಕರು:* ಯಾವುದೇ ಪದವಿಯೊಂದಿಗೆ ಬಿ.ಪಿ.ಇಡಿ ಮುಗಿಸಿರಬೇಕು. *ಅತಿಥಿ ಉಪನ್ಯಾಸಕರು:* ಸಂಬAಧಿಸಿದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ವಿದ್ಯಾರ್ಹತೆ ಕಡ್ಡಾಯವಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲಾತಿಗಳೊಂದಿಗೆ ಜೂನ್ 30 ರ ಒಳಗಾಗಿ ‘ಉಪನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಕೋಟೆ, ಬಳ್ಳಾರಿ’ ಇಲ್ಲಿಗೆ ಅರ್ಜಿಯನ್ನು ಸಲ್ಲಿಸಬೇಕು. ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಮೊ.9739490948 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ----------

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ